ಅಣ್ಣ ಬಸವಣ್ಣನಿಗೆ ಪ್ರಶ್ನೆ…

ಅಣ್ಣ ಬಸವಣ್ಣ ಇದೆಲ್ಲ ಏನಣ್ಣ?
ನೀ ಬಾಯಿ ಬಿಟ್ಟರೂ ನಂಬದವರ ನೀ ಏನೆಂಬೆ?
ಜಾತಿ ಹೀನನಾ ಮನೆಯ ಜ್ಯೋತಿ ನೀ…
ಹೀನ ಜಾತಿಗಳ ಪೊರೆದ ದೊರೆ ನೀ…!
*

ಕಲ್ಯಾಣದ ಬೆಂಕಿ ನೀ
ಕೆಳ ಜಾತಿ, ಮತ, ವರ್ಗಗಳಿಗೆ, ಕಣ್ಣು ನೀ
‘ಹೌದು! ಮಾದಿಗರ ಮನೆ ಮಗ ನೀ…’
…ನೀ ಎನಂದರೂ ನಂಬದಾ ಜನಾ-ನಾವು!
*

ಎಲ್ಲರ ಅಣ್ಣ, ಬಸವಣ್ಣನಾಗಿರುವಾಗ,
ಯಾರಿಗೂ ಸಿಗದೇ, ಕ್ರಾಂತಿಯಲ್ಲಡಗಿರುವಾಗ,
‘ನೀ ನಮ್ಮವ! ನೀ ಯಾರವ? ಅವ ಬೇರವ…’
ಎಂಬುವವರ ಕೆರದಿಂದ ಹೊಡೆಯೆಂಬೆಯೇನು??
*

ಜಾತಿ, ಜಾತಿ, ನೀ ಹೋಗು, ಊರಾಚೆಂದರೂ…
ಬಿಡದು, ಅಣ್ಣ ಬಸವಣ್ಣನಿಗೂ… ದೇವನಿಗೂ…
ಈ ಜಾತಿ, ವಿಜಾತಿನ ಇನ್ನೆಂಥಾ ಅಂಟಿನಿಂದ,
ಮಾಡಿರುವರೆಂದು, ನೀನಾದರೂ ಹೇಳಣ್ಣ?!
*

ಅಣ್ಣ ನೀ, ಯಾರಾದರೇನು? ಮನುಶ್ಯನೆಂಬುದು ಖರೇ…
ನಿನ್ನ ವಚನ, ಕಾಯಕ, ನಮಗೆ ಸ್ಫೂರ್ತಿದಾಯಕ!
ಅಣ್ಣ ನೀ, ನಮ್ಮವನಾದರೇನು??
ನಮ್ಮ ಭವಣೆ, ಇನ್ನು ತೀರಿಲ್ಲವಲ್ಲ ಯಾಕೆ??
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದ್ರ ಹೇಳಿದ್ದು
Next post ಕುಲಗೆಟ್ಟ ಹೆಣ್ಣು

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys